ಭೇದ

ಕರ್ನಾಟಕ ನಮ್ಮದು, ಆದರೆ
ಕಾವೇರಿ ನಮ್ಮದಲ್ಲ ಎನ್ನುವ
ಮನೋ ಭಾವ ಕೆಲವರದ್ದು
ಮನದಿಂದ ಕಿತ್ತೊಗೆದು ಒಂದಾಗಬೇಕು
ಕನ್ನಡಿಗರು ಮೊದಲು ಇದನ್ನು

ಕಾವೇರಿಯಾದರೇನು? ಕೃಷ್ಣೆ, ತುಂಗ
ಭದ್ರ, ಮಹದಾಯಿ ಆದರೇನು?
ರಾಜ್ಯದ ವಿಚಾರ ಬಂದಾಗ ಕನ್ನಡಿಗರೆಲ್ಲ
ಒಂದೇ ಎನ್ನುವ ಮನೋ ಭಾವ ಇರಲಿ

ಮನೆಯೊಳಗೆ ಕಲಹಕೆ
ಸಹೋದರರೇ ದಾಯಾದಿಗಳಂತೆ
ನೆರೆಮನೆಗಳ ಕಲಹದಲಿ
ದಾಯಾದಿಗಳೇ ಒಂದಾಗುವರು

ಓಣಿಯ ಅಥವಾ ಕೇರಿಗಳ ಕಲಹದಲಿ
ಮನೆ-ಮನೆಗಳು ಕಲಹ ಮರೆತು
ಒಂದಾಗಿ ಓಣಿಯೇ ಸೇರಿ ಒಂದಾಗಿ ನಿಲ್ಲುವುವು
ಅದೇ ರೀತಿಯಲ್ಲಿ ನಾವು ಕೂಡ

ರಾಜ್ಯದ ಸಮಸ್ಯೆಗೆ ರಾಜ್ಯವೇ ಒಂದಾಗಿ
ದೇಶದ ಸಮಸ್ಯೆಗೆ ರಾಜ್ಯಗಳೆಲ್ಲಾ ಒಂದಾಗಿ
ಸಮಸ್ಯೆಯನ್ನು ಎದುರಿಸುವ ಮನೋಭಾವ
ಬೆಳೆಸಿಕೊಂಡಾಗಲೇ ಮಾತ್ರ ನಾವು
ನಡೆಸಬಹುದು ನೆಮ್ಮದಿಯ ಜೀವನ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೊನೆಗೀಗ ನೋವೆಂದರೆ…..
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೧೦

ಸಣ್ಣ ಕತೆ

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

cheap jordans|wholesale air max|wholesale jordans|wholesale jewelry|wholesale jerseys